Sunday, August 16, 2009

ಬೆಂಗಳೂರಿನಲ್ಲಿ ಕಳೆದ ನಾಲ್ಕು ತಿಂಗಳು:


ಫೆಬ್ರವರಿ 2008 ರ ವರೇಗೆ ನನ್ನ ಮನದಲ್ಲಿ ಬೆಂಗಳೂರು ಎಂಬುದು ಕೇವಲ ಕನಸಲ್ಲಿ ಬರುವ ನಗರಿಯಾಗಿತ್ತು. ಆದರೆ ಅದೇ ನಗರಿಯಲ್ಲಿ ನಾನು ನಾಲ್ಕು ತಿಂಗಳು ಕಳೆಯುತ್ತೆನೆಂದು ಕನಸಲ್ಲು ಅಂದುಕೊಂಡಿರಲಿಲ್ಲ!!!

ಇದಕ್ಕೆ ಕಾರಣವಾಗಿದ್ದು ನನ್ನ ಎಮ್.ಬಿ.ಎ ಕಾಲೇಜ್. ಪ್ರಥಮ ವರ್ಷದ 3ನೇ ಸೆಮಿಷ್ಟರ್ ಆದ ಮೇಲೆ ನಾಲ್ಕು ತಿಂಗಳು ಪ್ರೊಜೆಕ್ಟ್ ವರ್ಕ್ ಗಾಗಿ ಬೆಂಗಳೂರಿಗೆ ಹೋಗುವ ಪ್ಲಾನ್ ಮಾಡಿದೆ. ಹೋಗುವ ವಿಚಾರವೇನೋ ಸರಿ……ಆದರೆ????? ಬೆಂಗಳೂರನ್ನು ಖಾಲಿ ಪೇಪರ್ನಲ್ಲಿ ಓದಿ ತಿಳಿದಿದ್ದ ನನಗೆ ಅದರ ನಿಜವಾದ ಚಿತ್ರಣವಿರಲಿಲ್ಲ. ಹನುಮಂತನಗರ ಎಂದು ಪೇಪೆರ್ನಲ್ಲಿ ಓದಿದರೆ, ಕೂಡಲೇ ಅದು ಹೇಗಿರಬಹುದು???ಅಲ್ಲಿ ಹನುಮಂತನಿರಬಹುದೇ???ಅಲ್ಲೆಲ್ಲಾ ಸಿನಿಮಾ ನಟ ನಟಿಯರು ಓಡಾಡುತ್ತಲೇ ಇರಬಹುದೇ??? ಎಂಬೆಲ್ಲಾ ಯೋಚನೆಗಳು ಮೂಡುತ್ತಿದ್ದವು..

ಬೆಂಗಳೂರು ಎಲ್ಲಿದೆ?? ಹೇಗಿದೆ??? ಯಾರೂ ಪರಿಚಯದವರಿಲ್ಲದ ಆ ಊರಲ್ಲಿ ನಾಲ್ಕು ತಿಂಗಳು ಎಂದರೆ?????? ಈ ಎಲ್ಲಾ ಪ್ರಶ್ನೆಗಳು ಹುಟ್ಟಿಕೊಂಡರೂ ಧೈರ್ಯ ಮಾಡಿ ಹೋಗುವ ನಿರ್ಧಾರ ಮಾಡಿದೆ….ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ದೊರಕಿದ್ದು ನಮ್ಮ ಪಿ. ಜಿ ಗೆಳೆಯರಾದ ವಿಪ್ರಭ ( ವಿಷ್ಣು ಪ್ರಸಾದ್ ಭಟ್) ಅವರು 9448472292 ನಂ. ಕೊಟ್ಟು ಕೋಂಟ್ಯಾಕ್ಟ್ ಆಗಲು ಹೇಳಿದಾಗ. ಆ ನಂಬರ್ ನನ್ನ ಗುರುಗಳದ್ದಾಗಿತ್ತು……ನನಗಾದ ಖುಷಿಗೆ ಪಾರವೇ ಇಲ್ಲ. ಫೋನ್ ಮಾಡಿ ಮಾತಾಡಿ ಎಲ್ಲ ವಿವರಿಸಿದ ನಂತರ ಅವರ (ಅರ)ಮನೆಯಲ್ಲಿರಲು ಪೂರ್ಣ ಪ್ರಮಾಣದ ಒಪ್ಪಿಗೆ ಸಿಕ್ಕಿತು. ಹಾಗೆ ನಾಲ್ಕು ತಿಂಗಳ ಬೆಂಗಳೂರಿನ ಪ್ರೊಜೆಕ್ಟ್ ವರ್ಕ್ ತುಂಬಾ ಅನುಭವಗಳನ್ನು ತಂದುಕೊಟ್ಟಿತು. That Bangalore project work has given me such a good exposure and I have learned a lot……ಈಗ ಬೆಂಗಳೂರು ಅಂದರೆ ನನಗೆ ಆಚಮನೆ ಇದ್ದ ಹಾಗೆ!!!!!! ಇದಕ್ಕೆಲ್ಲಾ ಕಾರಣರಾದ ನನ್ನ ಗುರುಗಳಿಗೆ (ಮಹೇಶ ಎಳ್ಳ್ಯಡ್ಕ )ಎಷ್ಟು ಥ್ಯಾಂಕ್ಸ್ ಹೇಳಿದರೂ ಕಡಿಮೆಯೇ……

ಈಗ ಈಗ ಬೆಂಗಳೂರು ಹೆಸರು ಕೇಳಿದರೆ ಅದೇನೋ ಅಸಹ್ಯ…..ಎಲ್ಲಿ ನೋಡಿದರೂ ಗಬ್ಬು ಗಬ್ಬು…..ಟ್ರಾಫಿಕ್.. ಟ್ರಾಫಿಕ್….ವಾಹನಗಳೆಂದರೆ ನಮ್ಮ ಊರಿನಲ್ಲಿ ಮಳೆಗಾಲದ “ ಬೆಳ್ಳ” ಹೋದ ಹಾಗೆ ಎಲ್ಲೆಂದರಲ್ಲಿ ನುಗ್ಗುತ್ತವೆ… ಇಲ್ಲಿ ಕಸದ ರಾಶಿಯಲ್ಲಿ ನಾಯಿಗಳಿಗೂ ಸ್ವಾತಂತ್ರ ಇಲ್ಲ!!!… ( ಮನುಷ್ಯರೇ ಅವರಿಗಿಂತ ಮೊದಲು ಹಾಜರಿರ್ತಾರೆ)!!!!!!!!!! ನಾನು ಮೇಲೆ ಹೇಳಿದ್ದು ನಿಮ್ಮ ಗಮನಕ್ಕೂ ಬಂದಿರಬಹುದಲ್ಲವೇ…….

ಕೊನೆಯ ಹನಿ:ಈಗ ಎನ್ನ ಐದು ಸೋದರತ್ತೆಕ್ಕಳ ಬಾಯಿಲಿ ಒಂದೇ ಶುದ್ದಿ……ಬಾಲ ಬೆಂಗಳೂರಿಂಗೆ ಹೋಯಿದ ಅಡ್ಡ ಹೇಳಿ………:):):)

No comments:

Post a Comment