Sunday, May 9, 2010

ತುಂಬಾ ಸಮಯದ ನಂತರ……….,
ನಿಜವಾದ ಗಳೆತನದ ಸವಿಯನ್ನು ಉಂಡ ಕಾಲ:
ನಾನು ಮೊದಲೇ ತಿಳಿಸಿದ ಹಾಗೆ ನಮ್ಮ ಕಾಲೇಜಿನಲ್ಲಿ ನಮ್ಮದೇ ಆದ ಗೆಳೆಯ ಗೆಳತಿಯರ ಗುಂಪು ಹುಟ್ಟಲು ಕಾರಣ ನಮ್ಮಲ್ಲಿದ್ದ ಸಮಾನತೆ. ಒಬ್ಬರನ್ನೊಬ್ಬರು ಮೀರಿಸುವಂತಹ tallent…….ನಾನು, ವಿನೋದ್, ಅಶ್ವಿನಿ, ವಿಜಿ, ಕಿಶೋರ್, ಲತಾ, ರಾಜಿ, ವಿನೀದ್, ಶ್ರೀಧರ್, ಶಾಂತಕುಮಾರ್, ಗಣೇಶ್,ವನಿತ……….
ಅಶ್ವಿನಿ ಭರತನಾಟ್ಯ ಪ್ರವೀಣೆಯಾದರೆ ಶಾಂತಕುಮಾರ್ ಹಾಗೂ ವಿಜಿ ಸಂಗೀತ ಸಾಮ್ರಾಟರಾಗಿದ್ದರು. ವಿನೋದ್, ವಿನೀದ್, ರಾಜಿ, ಕಿಶೊರ್ ಹಾಗೂ ಶ್ರೀಧರ್ subjects ನಲ್ಲಿ ತುಂಬಾ ಒಲವುಳ್ಳವರಾಗಿದ್ದರು. ಲತಾ ಅಂತೂ ನನ್ನ ಕೈಯ್ಯಿಂದ ಕೋರಸ್ ರಾಣಿ ಎಂಬ ಬಿರುದನ್ನು ಪಡೆದಿದ್ದಳು. (ಹಾಗೆ ಸುಮ್ಮನೆ ಚಿತ್ರದ ಟೈಟಲ್ song ಗೆ ಅವಳು ಸುಂದರವಾಗಿ ’ಕೋರಸ್’ ಹೇಳುತ್ತಿದ್ದಳು). ಮುಂಗಾರು ಮಳೆ ಜೋಡಿ ಎಂದೇ (ಕು)ಖ್ಯಾತಿ ಪಡೆದಿದ್ದ ಗಣೇಶ್ ಹಾಗೂ ವನಿತಾ ಜೋಡಿಯು ಪ್ರತಿ ದಿನವೂ ಕಾಲೇಜಿನ stepsಲ್ಲಿ ಕಾಲ ಕಳೆಯುತ್ತಿದ್ದರು!!!!! ಈ ವಿಷಯದಲ್ಲಿ ವಿನೀದ್ ಹಾಗೂ ರಾಜಿ ಜೋಡಿಯು ಅವರಿಗೆ ಸಮಾನ ಸ್ಪರ್ಧಿಗಳಾಗಿದ್ದರು.
ನಾವೆಲ್ಲರೂ ಒಬ್ಬರನ್ನೊಬ್ಬರು ತುಂಬಾ ಹಚ್ಚಿಕೊಂಡಿದ್ದೆವು. ಇಂತಹ ಗೆಳೆತನವು ನನ್ನ ಕಲಿಕೆಯ ಅಂತ್ಯದಲ್ಲಿ ಒದಗಿ ಬರುವುದೆಂಬ ಕಲ್ಪನೆಯೂ ನನಗಿರಲಿಲ್ಲ…. ಯಾಕೆಂದರೆ,
ಗೆಳೆತನ ಹುಟ್ಟಲು ಕಾರಣಗಳು ಬೇಕಿಲ್ಲ….ಒಂದು ಹನಿ ಕಣ್ಣೇರು ಸಾಕು…ಸಾಂತ್ವಾನದ ನುಡಿಗಳು ಸಾಕು…..ಯಾರೂ ಇಲ್ಲದಾಗ ನಾನಿದ್ದೇನೆಂಬ ಭರವಸೆಯ ಮಾತುಗಳು ಸಾಕು……ಬೇಡವೆನ್ನುವ ಜೀವನಕ್ಕೆ ಬೇಕು ಎಂದು ಪ್ರೇರೇಪಿಸುವ ಸ್ಪೂರ್ತಿದಾಯಕವಾದ ಪ್ರೇರಣೆ ಸಾಕು….ನಮ್ಮದೂ ಅಂತಹುದೇ ಗೆಳೆತನವಾಗಿತ್ತು…ನಮ್ಮ ಗ್ರೂಪ್ ನಲ್ಲಿ ಯರಾದರೊಬ್ಬರು ಕಾಲೇಜಿಗೆ ಬರದೆ ಹೋದರೆ ಅವರ absence ಎದ್ದು ಕಾಣುತ್ತಿತ್ತು…!!ನನಗೆ IFB ಕಂಪೆನಿಯಲ್ಲಿ placement ಆದಾಗ ಖುಷಿ ಒಂದೆಡೆಯಾದರೆ, ಎಲ್ಲರನ್ನು ಬಿಟ್ಟು ಹೋಗಬೇಕೆಂಬ ನೋವು ಮತ್ತೊಂದೆಡೆ..!!!! ಈಗ ಎಲ್ಲರು ಅವರವರ ಕೆಲಸದಲ್ಲಿ busy ಯಾಗಿದ್ದರೂ, ಜಂಗಮವಾಣಿ(ಮೊಬೈಲು!!!) ನಮ್ಮನ್ನು ಪರಸ್ಪರರನ್ನಾಗಿಸುತ್ತಿದೆJJJ…

No comments:

Post a Comment